ಕಲಾಭಿಮಾನಿಗಳ ಮಹತ್ವ ಸಾರಿದ ಸನ್ಮಾನ
ಲೇಖಕರು : ವಿಜಯ ಕರ್ನಾಟಕ
ಸೋಮವಾರ, ಫೆಬ್ರವರಿ 8 , 2016
|
ಫೆಬ್ರವರಿ 8, 2016
|
ಕಲಾಭಿಮಾನಿಗಳ ಮಹತ್ವ ಸಾರಿದ ಸನ್ಮಾನ
ಶಿರಸಿ :
ಕಲಾಕೊಡುಗೆಗೆ ಯಕ್ಷಗಾನದ ಕಲಾವಿದರನ್ನು ಗೌರವಿಸುವುದನ್ನು ಕೇಳಿದ್ದೇವೆ, ನೋಡಿದ್ದೇವೆ...ಆದರೆ ಇಲ್ಲಿ ಯಕ್ಷಕಲೆಯನ್ನು ನಿರಂತರವಾಗಿ ವೀಕ್ಷಣೆಯ ಮೂಲಕ ಕಲಾ ಜೀವಂತಿಕೆಗೆ ಪ್ರೇರಕರಾದ ಕಲಾಭಿಮಾನಿಗಳನ್ನು ಹದಯಸ್ಪರ್ಶಿಯಾಗಿ ಸನ್ಮಾನಿಸಲಾಯಿತು....ಈ ಮೂಲಕ ಕಲೆ ಉಳಿವಿಗೆ ಕಲಾವಿದರಷ್ಟೇ ಅಲ್ಲದೇ ಕಲಾಪ್ರೇಕ್ಷಕರೂ ಅಷ್ಟೇ ಮಹತ್ವ ಎಂಬುದನ್ನು ಸಾರಿ ಹೇಳಲಾಯಿತು.
ಇಂಥದ್ದೊಂದು ಅಪರೂಪದ ಕಾರ್ಯಕ್ರಮ ನಗರದ ತೋಟಗಾರರ ಕಲ್ಯಾಣ ಮಂಟಪದಲ್ಲಿ ಭಾನುವಾರ ಸಂಜೆ ಆಯೋಜನೆಯಾಗಿತ್ತು. ಇಲ್ಲಿಯ ಯಕ್ಷಪ್ರಿಯ ಬಳಗದ ವಾರ್ಷಿಕೋತ್ಸವದಲ್ಲಿ ಇಂಥ ವಿಧಾಯಕ, ವಿಭಿನ್ನ ಕಾರ್ಯಕ್ರಮ ಸಂಘಟನೆಯಾಗಿ ಮೆಚ್ಚುಗೆಗೆ ಪಾತ್ರವಾಯಿತು. ವೇದಿಕೆಯಲ್ಲಿ ಅಭಿನಯಿಸಿ ಕಲಾಸಕ್ತರನ್ನು ರಂಜಿಸುವ, ತಮ್ಮ ಮಾತುಗಾರಿಕೆ ಮೂಲಕ ಮನತಟ್ಟುವ, ಪೌರಾಣಿಕ ಪಾತ್ರಗಳಿಗೆ ಜೀವ ತುಂಬುವ ಕಲಾವಿದರನ್ನು ಗೌರವಿಸಿ ಇನ್ನಷ್ಟು ಕಲಾಸಾಧನೆಗೆ ಪ್ರೇರಣೆ ನಿರಂತರವಾಗಿ ಸಂಘಟನೆ ಮೂಲಕ ನಡೆಯುತ್ತಿರುತ್ತದೆ. ಆದರೆ ಇಂಥ ಕಲಾವಿದರ ಕಲಾಪ್ರತಿಭೆ ವೀಕ್ಷಿಸಿ ಪರಂಪರಾ ಕಲೆ ಉಳಿಸುವುದಕ್ಕೆ ಮುಂಭಾಗದಲ್ಲಿ ಪ್ರೇಕ್ಷಕರ ಅಗತ್ಯವೂ ಅಷ್ಟೇ ಅವಶ್ಯ. ಕಲಾವಿದರಿದ್ದೂ ಕಲಾಭಿಮಾನಿಗಳಿಲ್ಲದಿದ್ದರೆ ಪ್ರಯೋಜನವಿಲ್ಲದಂತಾಗುತ್ತದೆ. ಇದನ್ನು ಮನಗಂಡ ಯಕ್ಷಪ್ರಿಯ ಬಳಗ ಅಪರೂಪದ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಈ ಭಾಗದ 15ಮಂದಿ ಕಲಾಪ್ರೇಕ್ಷಕರನ್ನು ಗೌರವಿಸಿತು.
15ಮಂದಿಗೆ ಗೌರವಾರ್ಪಣೆ: ಯಕ್ಷ ಕಲೆಯ ವೀಕ್ಷಣೆಯನ್ನು ನಿರಂತರವಾಗಿ ಜೀವನದ ಭಾಗವಾಗಿಸಿಕೊಂಡಿರುವ ನಾರಾಯಣ ಹೆಗಡೆ ಆಡಳ್ಳಿ, ಶ್ರೀನಿವಾಸರಾವ್ ಕಂಚಿಕೊಪ್ಪ, ಸುಬ್ರಾಯ ಹೆಗಡೆ ಶಿಂಗನಳ್ಳಿ, ಆರ್.ಜಿ.ಭಟ್ಟ ಶಿರಸಿ, ಗಣಪತಿ ಭಟ್ಟ ತುಡಗುಣಿ, ಜಿ.ಆರ್.ಹೆಗಡೆ ಆಲ್ಮನೆ, ರಾಮಕಷ್ಣ ಭಟ್ಟ ಕಗ್ಗುಂಡಿ, ಐ.ಪಿ.ಹೆಗಡೆ ಗೋಳಗೋಡ, ಚಂದ್ರಶೇಖರ ಶೆಟ್ಟಿ ಶಿರಸಿ, ಗಣಪತಿ ಹೆಗಡೆ ವಾರಣಾಸಿಮನೆ, ಎಸ್.ಎಸ್.ಭಟ್ಟ ಶಿರಸಿ, ವಾಸುದೇವ ಶಾನಭಾಗ, ಉಮೇಶ ಭಟ್ಟ ವರ್ಗಾಸರ, ವಿರೂಪಾಕ್ಷ ಭಾಗವತ ಶೀಗೇಹಳ್ಳಿ, ಗಣೇಶ ಎಸ್.ಹೆಗಡೆ ಕೆಶಿನ್ಮನೆ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಯಕ್ಷಗಾನ ಭಾಗವತ ನಾರಾಯಣ ಭಾಗವತ ನೆಬ್ಬೂರು, ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಭಾಸ್ಕರ ಹೆಗಡೆ ಕಾಗೇರಿ, ಉದ್ಯಮಿ ಉಪೇಂದ್ರ ಪೆ, ಕಲಾಪೋಷಕ ಆರ್.ಜಿ.ಭಟ್ಟ ವರ್ಗಾಸರ , ಯಕ್ಷಪ್ರಿಯ ಬಳಗದ ಕಮಲಾಕರ ಹೆಗಡೆ ಕೂಗ್ತೆಮನೆ, ಗಿರಿಧರ ಕಬ್ನಳ್ಳಿ ಪಾಲ್ಗೊಂಡಿದ್ದರು.
ಕೃಪೆ :
vijaykarnataka
|
|
|